Sunday, June 3, 2018

ಕವಿತೆ: ರಮಣ



                                  “ರಮಣ”

ಜೀವದ ಕರೆಯ ಕೇಳಿಯೂ ಏಕೆ, ಸುಡುವ ಬಿಸಿ ಮೌನ ರಸಋಷಿಯೆ?! ||೧||
ಕಾವ್ಯದ ಕರೆಯ ಕೇಳಿಯೂ ಏಕೆ, ಬಿಡದ ’ಕವಿ ಮೌನ’ ರಸಋಷಿಯೆ?!! ||೨||

ನಿನ್ನನೆ ನೆಚ್ಚಿ ಬಂದಿಹ ಜೀವ, ಏಕಾಂತಕೆ ದೂಡದೆ ನನ್ನ
ಕೂಡಿ, ಬೆರೆತು, ಶೃಂಗಾರ ಸುರಿದು, ರತಲೋಕ ತೋರಿ ಜೀವರ್ಷಿ ಆಗದೆ ||೧||
ನಿನ್ನೊಳೆ ಹುಟ್ಟಿ ತುಂಬಿಹ ಕಾವ್ಯ, ಏಕಾಂತಕೆ ನೂಕದೆ ನನ್ನ
ಕೂಡಿ, ಒಲಿದು, ಕವಿವಾಣಿ ಸುರಿದು, ರಸಲೋಕ ತೋರಿ ಭಾವರ್ಷಿ ಆಗದೆ ||೨||

ಜೀವಕೆ ಜೀವ ಭಾವವೆ ತಾನೆ, ಇದ ಮರೆತು, ಕಲೆಯದೆ ನನ್ನ
ನವ ಭಾವ ತುಂಬಿ, ಒಲಿದ ಅರಸಿಯ, ಸೇರಿ ಬಳಸಿ, ನೀ ರಮಣನಾಗದೆ!!||೧||
ಕಾವ್ಯಕೆ ಕಾಯ ಭಾವವೆ ತಾನೆ, ಇದ ಕಳೆದು, ಮರೆಯದೆ ನನ್ನ
ನವ ಭಾವ ಚಿಮ್ಮಿ, ಅರಸಿ ಒಲಿದಿರೆ, ’ಕವಿಶೈಲ’ವೇರಿ ನೀ ರಮಣನಾಗದೆ!! ||೨||

ರಚನೆ - "ಸಂತ" (ಸ.ಗು.ಸಂತೋಷ್)
ತಾರೀಖು - ೦೯/೦೯/೧೩

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...