Saturday, June 23, 2018

ಕವಿತೆ: ಕಾವ್ಯ ಕನ್ನೆ










                 ಕಾವ್ಯ ಕನ್ನೆ


ಯೌವ್ವನದ ಹರವಿನಲಿ, ಗೊಂದಲದ ಮಡುವಿನಲಿ
ಸಂಶೋಧದ ರೋಗ, ಅಲೆಮಾರಿ ನಾನೀಗ!

ಕವಿ-ಕಾವ್ಯ ರಸದೊನ್ನೆ, ಏನೆನಲಿ ಈ ಕನ್ನೆ?!
ಹೇಗೆ ಆಗುವಳಿವಳು ಇಂದೆನ್ನ ಮನದನ್ನೆ?

ಎನ್ನೆ,
ನಿಜ! ಕಣ್ನೋಟಕೆ ಇಂದು, ನೀನೆ ಸುರಚೆನ್ನೆ!!
ಕವಿ ಕಣ್ಗೆ ರತಿ ರನ್ನೆ, ರಸಿಕಗೆ ಸವಿಬೆಣ್ಣೆ!!

ಆಗ,
ನಾಚಿ ಕೆಂಪೇರಿ ಅರೆಬಿರಿದು ಮಲ್ಲೆ ಮುಖ
ಆಗಿಬಿಡುವೆನು ಒಡನೆ ನಾನವಳ ಇಷ್ಟ ಸಖ

ಎನಲು,
ಕನಲಿ ಕೆಂಪೇರಿ, ಕೆರಳಿ ಸಿಡಿದಳಾ ನಾರಿ
ನುಡಿಯಲಿದ್ದುದೊಂದೆ ಆಗ ಕ್ಷಮಿಸಿ ರೀ!

ಕೊನೆಗೆ,
ಮೂಡಣದ-ಪಡುವಣದ ನೇಸರನು ಚಂದ
ನಮಗೆ ಅವನಿಗೆ ಬರಿಯ ಕವಿ-ಕಾವ್ಯ ಬಂಧ!

ಅರಿತೆ, 
ಅಂತೆಯೆ ಚೆಲುವೆ ನಮ್ಮಿಬ್ಬರ ಸಿರಿನಂಟು
ಎನ್ನ ಕಾವ್ಯದಿ ಮಾತ್ರ ಇನ್ನು ನೀನುಂಟು!!


ರಚನೆ - ಸಂತ (ಸ.ಗು.ಸಂತೋಷ್)
ತಾರೀಖು - ೧೪/೧೧/೦೭

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...