ಕಾವ್ಯ ಕನ್ನೆ
ಯೌವ್ವನದ ಹರವಿನಲಿ, ಗೊಂದಲದ ಮಡುವಿನಲಿ
ಸಂಶೋಧದ ರೋಗ, ಅಲೆಮಾರಿ ನಾನೀಗ!
ಕವಿ-ಕಾವ್ಯ ರಸದೊನ್ನೆ, ಏನೆನಲಿ ಈ ಕನ್ನೆ?!
ಹೇಗೆ ಆಗುವಳಿವಳು ಇಂದೆನ್ನ ಮನದನ್ನೆ?
ಎನ್ನೆ,
ನಿಜ! ಕಣ್ನೋಟಕೆ ಇಂದು, ನೀನೆ ಸುರಚೆನ್ನೆ!!
ಕವಿ ಕಣ್ಗೆ ರತಿ ರನ್ನೆ, ರಸಿಕಗೆ ಸವಿಬೆಣ್ಣೆ!!
ಆಗ,
ನಾಚಿ ಕೆಂಪೇರಿ ಅರೆಬಿರಿದು ಮಲ್ಲೆ ಮುಖ
ಆಗಿಬಿಡುವೆನು ಒಡನೆ ನಾನವಳ ಇಷ್ಟ ಸಖ
ಎನಲು,
ಕನಲಿ ಕೆಂಪೇರಿ, ಕೆರಳಿ ಸಿಡಿದಳಾ ನಾರಿ
ನುಡಿಯಲಿದ್ದುದೊಂದೆ ಆಗ ಕ್ಷಮಿಸಿ ರೀ!
ಕೊನೆಗೆ,
ಮೂಡಣದ-ಪಡುವಣದ ನೇಸರನು ಚಂದ
ನಮಗೆ ಅವನಿಗೆ ಬರಿಯ ಕವಿ-ಕಾವ್ಯ ಬಂಧ!
ಅರಿತೆ,
ಅಂತೆಯೆ ಚೆಲುವೆ ನಮ್ಮಿಬ್ಬರ ಸಿರಿನಂಟು
ಎನ್ನ ಕಾವ್ಯದಿ ಮಾತ್ರ ಇನ್ನು ನೀನುಂಟು!!
ರಚನೆ - ಸಂತ (ಸ.ಗು.ಸಂತೋಷ್)
ತಾರೀಖು - ೧೪/೧೧/೦೭
ಎನ್ನ ಕಾವ್ಯದಿ ಮಾತ್ರ ಇನ್ನು ನೀನುಂಟು!!
ರಚನೆ - ಸಂತ (ಸ.ಗು.ಸಂತೋಷ್)
ತಾರೀಖು - ೧೪/೧೧/೦೭
No comments:
Post a Comment