Saturday, June 23, 2018

ಕವಿತೆ: ಶಾಸ್ತ್ರಿಯ ಕೊಡೆಯ ವಿಚಾರ

ರಮಾನಂದರ "ಕೊಡೆಯ ವಿಚಾರ"
ನೆನಪಿನಂಗದಿ ಲಾಸ್ಯವಲ್ಬತ್
ಶಾಸ್ತ್ರಿ ಪೇಳಿದ ಕತೆ ಎಮಗೆ ಚೋದ್ಯಮಂ ಮತ್ತಂ ದುಗುಡಮಂ ನೈಜಮಂ
ನೇಹಪೊನಲೊಳ್ ಮಾನಪೆಂಪನ್
ಕಂಡಿರೇನ್ ಬೆರಗಾದರೇನ್!
ಭಾಷೆ-ಭಾಷ್ಯದ ಪರಿಯ ಮೆಚ್ಚದಿರ್ದೊಡೆ ಬುಧಜನರ್ ಬಿನದಗೈವರುಂ

ಮಿತ್ರನ ಮಾತಿನಿಂ ಕೊಮೆಯಿತೇನ್
ದೇಹ, ತೆರೆದಿತಲ್ತೆ ಮನಗಣ್
ಓಷಧಿ ಕಹಿಯಿರ್ಕೆ ಅದ ಬಿಸುಟುವನೇನ್ ರೋಗಿ ಜಗದೊಳ್ ಪೇಳಿರ್
ಸ್ಥಿರಮಿಲ್ಲದೆ ಮನಗ್ಲಾನಿಸೆ
ಬೆಜ್ಜರಿಲ್ಲದೆ ಉಳಿವಿರ್ಪುದೇ
ಜಸಂಬಡದೀ ಗುಂಪು ಗೊಂಟಿರದೆ ಕಾಣ್ವುದು ಮಿಳ್ತುಮ್

ಮಿಹಿರನೋರ್ವನುಂ ನಭಕಿರಲ್
ಮಿಸುಪು ಕಾಣ್ವುದೆ ಕಳ್ಗಿರುಳಿನೊಳ್
ಚಂದ್ರತಾರೆಯಿದ್ದೊಡಮಲ್ತೆ ಸೊಗಸುಂ, ಪೊಳಪುಂ ಬಾನ್-ಬುವಿಯೊಳಿರ್ಕುಮ್
"ಕಹಳೆ" ಪುಟ್ಟಿದರಾಯ್ತೆ ಆರ್
ಪೋಷಿಸುವರಿದನ್ ಪೇಳ್ ಮಿತ್ರ
ಭಕ್ತಿಯುಂ ಎನಗೆಂದಿನಿತರ್ಚನೆ ಮಾಣ್ದೊಡೆ ಪೂಜೆಯೆನರ್ ಜಗದೊಳುಂ

ಶುಭವಾಗಲಿ,
ಇಂತಿ ನಿಮ್ಮ,
ಎಸ್.ಜಿ

ರಚನೆ: ಸಂತ(ಸ.ಗು.ಸಂತೋಷ)
ತಾರೀಖು: ೨೦೦೨

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...