ಅಮ್ಮ, ಶಾರದೆ ಶೃಂಗಗಿರಿ ನಿವಾಸಿನಿ
ಬಂದೆನ್ನ ಕನಸಿನಂಗಳವ ಬೆಳಗಿ, ಹರಸಿ
ದಾರಿ ದೀವಿಗೆಯಾಗಿ, ಭಕ್ತಿ ಕೋವಿದೆಯಾಗಿ
ಕರವಿಡಿದು ನಡೆಸುತ್ತ, ಹರಸುತ್ತ, ಕರುಣಿಸುತ
ಎನ್ನೆಲ್ಲ ಮರೆವನ್ನು, ಜಡವನ್ನು ಮನ್ನಿಸುತ
ದಿವ್ಯ ಸನ್ನಿಧಿಗೆ, ನಿನ್ನ ಮಂಗಳದಂಗಳಕೆ
ಇನಿತು ಸುಗಮದಿ, ಮಮತೆಯೊಲು ಕರೆಸಿಕೊಂಡೆಯ!
ಓ ತಾಯೆ, ಶಾರದೆಯೆ, ವಾಗ್ದೇವಿ, ಸರಸತಿಯೆ
ಅರಿಶಿನ ಕುಂಕುಮದ ವರ್ಣ ಪೂರಿತ ಸಾಲೆ
ಅರ್ಪಿಸಿರೆ ನಿನ್ನಡಿಗೆ ಸುಮುಹೂರ್ತದ ವೇಳೆ
ಸುಮ ಮಂಗಳ ದ್ರವ್ಯದಿಂದಲಿ, ಸಿಂಗರಿಸಿ
ಸೇವೆಯುಡುಗೆಯಿಂ ಅಂದದೊಲು ಕಂಗೊಳಿಸಿ
ಮಂದಹಾಸವ ಬೀರಿ, ಸುಪ್ರಸನ್ನತೆ ತೋರಿ
ಮನದೆ ಧನ್ಯತೆ ನೀಡಿ, ಜೀವ ಪಾವನಗೈದೆಯ!
ರಚನೆ - "ಸಂತ" (ಸ.ಗು. ಸಂತೋಷ್)
ತಾರೀಖು - ೧೦/೦೪/೧೦
No comments:
Post a Comment