Thursday, April 25, 2024

ಕವಿತೆ: ಹಿಂತಿರುಗಿ ನೋಡಿದಾಗ

ಹಿಂತಿರುಗಿ ನೋಡಿದಾಗ


ಬದುಕಿನಂಗಳದಲಿ ಬಂದು ಹೋಗಿಹ ಚಿತ್ರಗಳಿಗೆ ಸಿಗದು ಎಣಿಕೆ

ನೆನಪಿನಂಗಳದಿ ಮಿನುಗಿ ಬೆಳಗುತಿಹ ತಾರೆಗಳೆನೆ ಅವು ಬೆರಳೆಣಿಕೆ! 


ರಮ್ಯೋದ್ಯಾನದಿ ನಳನಳಿಸಿದ ಬಣ್ಣಬಣ್ಣದ ಹೂಗಳು ಹಲವು!

ಹೃದಯಾಂತರಾಳದಿ ಅರಳಿ, ಘಮಘಮಿಸಿ ತಣಿಸಿದವು ಮಾತ್ರ ಕೆಲವು


ದೃಷ್ಟಿಗೆ ತೋರಿ ಹೃನ್ಮನ ಕಾಡಿದ ಸೃಷ್ಟಿಯ ಸಿರಿಯದು ಎನಿತೆನಿತೊ

ಹೃನ್ಮನ ತಣಿಸಿ ಕವಿಮನ ತೆರೆಸಿದ ಅನುಪಮ ಸಿರಿಗೆ ಮಿತಿ ಇನಿತೊ!


(ಬಾಕಿ ಇದೆ)

ರಚನೆ: ಸಂತ (ಸ.ಗು ಸಂತೋಷ್)

ತಾರೀಖು: ೧೮/೧೦/೨೦೨೩

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...