Sunday, June 15, 2025

ಕವಿತೆ: ಬತ್ತಿದ‌ ಆ ಒರತೆ

 


ಬತ್ತಿದ ಆ ಒರತೆ!


ಮುಕ್ತಿಧಾಮಕೆ ತೆರಳಿದ ಒಡನೆ   ನಾಡಿನ ಹೆಮ್ಮೆಯ ಚೇತನ!!

ಜ್ಯೇಷ್ಠ ಮಾಸದ ಚೌತಿಯ ದಿನದಿ, ದಿವ್ಯ ಸೃಷ್ಟಿಯ ರೋಧನ!


ಅಂಬರ ನೊಂದು, ಕಂಬನಿಗರೆದು, ಮೊರೆದು ಗೋಳಾಡುತಿದೆ

ಭೂರಮೆ ನೆನೆದು, ನೆಲ-ಮಲೆ ಕುಸಿದು, ಜೀವ ಹೋಳಾಗುತಿದೆ!


ಕಾವ್ಯ ಕುಸುಮಕೆ ಕೂಡದೆ ಕಂಪು, ಉಸಿರು ಬಿಗಿದಾಗುತಿದೆ

ಭಾವದೊರತೆಗೆ ಕಾಣದೆ ಹರಿವು, ಮೌನವೆ ಮಾತಾಗುತಿದೆ  


ಮೂಕ ವೇದನೆ ತಾಳದ ಪ್ರೀತಿ, ಕವಿಯ ಹಾಡಾಗುತಿದೆ

ಗಾನಾಮೃತದಿ ಅಂತಿಮ ನಮನ, ಜಗದ ಧ್ವನಿಯಾಗುತಿದೆ


ಭಕ್ತಿ ಪರಾಗ, ರಾಗ-ವಿರಾಗ,  ಎಲ್ಲಾ ರಸವಾಗುತಿದೆ

ಯುಕ್ತ ವಿಚಾರ, ಮುಕ್ತಾಚಾರ

ಜೀವ ಹಗುರಾಗುತಿದೆ!   


ರಚನೆ: 'ಸಂತ' (ಸ.ಗು ಸಂತೋಷ್)

ತಾರೀಖು: ೩೧/೦೫/೨೦೨೫


ಪ್ರೇರಣೆ: ಹೆಚ್.ಎಸ್.ವಿ ಅವರ ಅಂತಿಮ ಯಾತ್ರೆಯ ಸಂದರ್ಭ

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...